ಉಡುಪಿ: ಜೇಸಿಐ ಉಡುಪಿ ಇಂದ್ರಾಳಿಯು ಪೇತ್ರಿಯ ಸಮೃದ್ಧಿ ಮಹಿಳಾ ಮಂಡದ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಯಕ್ರಮ ದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐದು ಮಂದಿ ಮಹಿಳೆಯರಿಗೆ ಜೇಸಿ ಪಂಚ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕೃಷಿ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಪೇತ್ರಿಯ ಅನ್ನಪೂರ್ಣ ನರ್ಸರಿಯ ಪ್ರಸನ್ನಾ ಪ್ರಸಾದ್ ಭಟ್ ಅವರಿಗೆ ಕಿಸಾನ್ ರತ್ನ, ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳ ರೂವಾರಿ ಹಾಗೂ ಮಕ್ಕಳನ್ನು ರಾಜ್ಯಮಟ್ಟದ ಸ್ಫರ್ಧೆಗಳಿಗೆ ಅಣಿಗೊಳಿಸುವ ಅಧ್ಯಾಪಕಿ ವನಿತಾ ಶೆಟ್ಟಿ ಅವರಿಗೆ ವಿದ್ಯಾರತ್ನ, ಉದ್ಯಮ ಕ್ಷೇತ್ರದ ಸಾಧಕಿ ಕಸ್ತೂರಿ ಎನ್. ಶೆಟ್ಟಿ ಅವರಿಗೆ ಉದ್ಯಮ ರತ್ನ, ತ್ರೋಬಾಲ್ನಲ್ಲಿ ವಿಶ್ವವಿದ್ಯಾಲಯ,