ಹುಬ್ಬಳ್ಳಿಯಲ್ಲಿ ಈ ಕಚೇರಿ ಸ್ಥಾಪಿತವಾದಲ್ಲಿ ಸಮಸ್ತ ಉತ್ತರ ಕರ್ನಾಟಕ ಭಾಗದ ವ್ಯಾಪಾರ ಹಾಗೂ ಉದ್ದಿಮೆಗಳ ಬೆಳವಣಿಗೆಗೆ ಸಹಕಾರಿ ಯಾಗಲಿದೆ’ ಎಂದು ಜೋಶಿ ಸಚಿವರ ಗಮನಕ್ಕೆ ತಂದರು.
ಸಚಿವ ಪಾಸ್ವಾನ್ ಸ್ಥಳದಲ್ಲಿಯೇ ಬಿಐಎಸ್ ಮಹಾ ನಿರ್ದೇಶಕರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಈ ಬಗ್ಗೆ ಕೂಡಲೇ ಕಡತಮಂಡಿಸಿ, ಕ್ರಮ ಕೈಗೊಳ್ಳಲು ಆದೇಶಿಸಿದರು. ಹೀಗಾಗಿ ಶೀಘ್ರವೇ ಹುಬ್ಬಳ್ಳಿಯಲ್ಲಿ ಕಚೇರಿ ಸ್ಥಾಪನೆ ಯಾಗಲಿದೆ ಎಂದು ಜೋಶಿ ತಿಳಿಸಿದರು.
ಹುಬ್ಬಳ್ಳಿಯ ನಿಯೋಗದಲ್ಲಿ ಮನೋಹರ ಕೊಟ್ರಶೆಟ್ಟರ, ವಿಶ್ವಜೀತ ಉಳ್ಳಿಗೇರಿ, ನರೇಂದ್ರ ಕುಲಕರ್ಣಿ, ಸಿದ್ದರಾಮಗೌಡ ಪಾಟೀಲ, ಶ್ರೀಕಾಂತ ಥಿಟೆ, ರವೀಂದ್ರ ಮಹಾಜನ್, ಶ್ರೀರಂಗ ಹನಮಸಾಗರ, ಬಿ.ಎಂ. ಪುರೋಹಿತ, ಶಾಮ ರಾಯಸ್ತ ಇದ್ದರು ಎಂದು ಪ್ರಕಟಣೆ ತಿಳಿಸಿದೆ.