ಹಲವು ವಾರ್ಡ್ಗಳಲ್ಲಿ 10ರಿಂದ 15ದಿನಕ್ಕೊಮ್ಮೆ ಕುಡಿಯುವ ನೀರಿನ ಸರಬರಾಜು ಆಗುತ್ತಿದೆ. ಅನೇಕ ಕೊಳವೆ ಬಾವಿಗಳು ಅಂತರ್ಜಲ ಇಲ್ಲದೆ ಬತ್ತಿ ಹೋಗಿವೆ. ಇನ್ನಾದರೂ ಜಿಲ್ಲಾಡಳಿತ ಸಮರ್ಪಕವಾಗಿ ಕುಡಿಯುವ ನೀರಿನ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಹಿರೇಮಠ ಮಾತನಾಡಿ ಮಹಾನಗರ ಪಾಲಿಕೆಯು ಸಮಸ್ಯೆಗಳ ಆಗರವಾಗಿದೆ. ಆದ್ದರಿಂದ ಜಿಲ್ಲಾಡಳಿತವೇ ಮುಂದೆ ಬಂದು ಪೈಲಟ್ ಯೋಜನೆ ಮೂಲಕ ನೀರಿನ ಬವಣೆ ತಪ್ಪಿಸಬೇಕು. ಗೋಶಾಲೆಗಳಿಗೆ ಸಾಕಷ್ಟು ಮೇವುಗಳನ್ನು ಒದಗಿಸಬೇಕು ಎಂದರು.
ಜೆಡಿಎಸ್ ನಗರ ಘಟಕದ ಅಧ್ಯಕ್ಷ ಗೋವಿಂದ ಜೋಶಿ ಮಾತನಾಡಿ ಸತತ ಬರಗಾಲದ ಹಣೆಪಟ್ಟಿ ಹೊಂದಿರುವ ವಿಜಯಪುರ ಜಿಲ್ಲೆಯು ಪ್ರತಿ ವರ್ಷಕ್ಕಿಂತ ಈ ವರ್ಷ ಹೆಚ್ಚು ಸಮಸ್ಯೆಯಿಂದ ಬಳಲುತ್ತಿದೆ. ನಗರದ ಹಲವು ಕಡೆ ಕುಡಿವ ನೀರಿನ ತತ್ವಾರ ಉಂಟಾಗಿದೆ. ಕೂಡಲೇ ಜಿಲ್ಲಾಡಳಿತ ಟ್ಯಾಂಕರ್ ಮೂಲಕ ನೀರನ್ನು ಪೂರೈಸಬೇಕು ಹಾಗೂ ಕೊಳವೆಬಾವಿ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಆರ್.ಎ.ನಿಕ್ಕಂ, ಎಸ್.ಎಸ್.ಖಾದ್ರಿ ಇನಾಮದಾರ, ಶಹಾಜಾನ ಖಾದ್ರಿ, ಪಾಲಿಕೆ ಸದಸ್ಯ ಪೀರಾ ಅಗಸಬಾಳ, ಅನ್ನಪೂರ್ಣ ಬಡಿಗೇರ, ರಜಾಕಬಿ ಬಾಗವಾನ, ಜಯಶ್ರೀ ಚಿಗರಿ, ರಮೀಜಾ ನದಾಫ, ಬೀಬಿ ಹಾಜರಾ ಗಂಗೂರ, ಖಾಜಾ ಪುಂಗಿವಾಲೆ, ಯಾಕೂಬ ಸಿಕ್ಲೋಡಿ, ಮುರ್ತುಜ ಕಾಂಕಲ, ಮೆಹಬೂಬ ಹೆಬ್ಬಾಳ, ಸಿಕಂದರ ಹಂಚನಾಳ, ಹೈದ್ರಾಲಿ ಹುಲ್ಲೂರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.