ಹಾವೇರಿ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜಾತಿ ಪ್ರಮಾಣ ಪತ್ರ ನೀಡಲು ಹಾವೇರಿಯ ಗ್ರೇಡ್–2 ತಹಶೀ ಲ್ದಾರ್ ಸಿ.ಎಸ್.ಭಂಗಿ ಸತಾಯಿಸುತ್ತಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳ ಬೇಕು ಎಂದು ಹಾವೇರಿ ತಾಲ್ಲೂಕು ಪರಿಶಿಷ್ಟ ಪಂಗಡಗಳ ಮೀಸಲಾತಿ ಸಮಿತಿ ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಮಾಡಿದೆ.
ಈ ಕುರಿತು ಮನವಿ ಸಲ್ಲಿಸಿರುವ ಸಮಿತಿ ಅಧ್ಯಕ್ಷ ಪರಶುರಾಮ ಅಗಡಿ ಹಾಗೂ ನಗರಸಭೆ ಸದಸ್ಯ ವೆಂಕಟೇಶ ಇಟಗಿ, ‘ಶಿಕ್ಷಣ ಹಕ್ಕು ಕಾಯಿದೆ ಅಡಿ ಸೀಟು ಪಡೆಯಲು ಮಕ್ಕಳಿಗೆ ಜಾತಿ ಪ್ರಮಾಣದ ತುರ್ತು ಅವಶ್ಯಕತೆ ಇದೆ. ಆದರೆ, ಗ್ರೇಡ್–2 ತಹಶೀಲ್ದಾರ್, ಯಾವುದೇ ವಿಚಾರಣೆ ನಡೆಸದೇ ಅರ್ಜಿ ಗಳನ್ನು ತಿರಸ್ಕರಿಸುತ್ತಿದ್ದಾರೆ.