ಸವದತ್ತಿ ಎಪಿಎಂಸಿ ನಿರ್ದೇಶಕ ಎಫ್.ಎಸ್. ಸಿದ್ಧನಗೌಡರ ಮಾತನಾಡಿ, ಯಕ್ಕುಂಡಿ ವಿರಕ್ತಮಠಕ್ಕೆ ವಿಶೇಷವಾದ ಸ್ಥಾನಮಾನವಿದೆ. ಮಠದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕೊಡುಗೆ ಅಪಾರವಿದೆ. ಭಕ್ತರು ಗುರು ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಜೈಲಾನಿ ಬಾರಿಗಿಡದ, ಸದಸ್ಯ ಬಸವರಾಜ ನಡುವಿನಮನಿ, ಶಂಕರ ಪಾಶ್ಚಾಪುರ, ಇಸ್ಮಾಯಿಲ್ ಮುಜಾವರ, ವಿಜಯಕಾಂತ ದೇಸಾಯಿ, ನಾಗಪ್ಪ ಹಿಟ್ಟನಗಿ, ಬಸನಗೌಡ ಪಾಟೀಲ, ಬಂದೇನವಾಜ್ ಮುಲ್ಲ ಮತ್ತಿತರರು ಭಾಗವಹಿಸಿದ್ದರು.