ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಸಾಯಿಖಾನೆ ಆರಂಭಿಸಲು ಕೆಐಎಡಿಬಿ 2014ರಲ್ಲಿ 35 ಎಕರೆಯನ್ನು ಪಾಲಿಕೆಗೆ ಹಸ್ತಾಂತರಿಸಿತು. ವಿನ್ಯಾಸ, ನಿರ್ಮಾಣ, ನಿರ್ವಹಣೆ ಹಾಗೂ ಹಸ್ತಾಂತರ ಯೋಜನೆಯಡಿ ಇದನ್ನು ಅಭಿವೃದ್ಧಿಪಡಿಸಲು ಬಿಬಿಎಂಪಿ ನಿರ್ಣಯಿಸಿತು. ಚೆನ್ನೈ ಅಬಟೈರ್ ಸಂಸ್ಥೆ ತಾಂತ್ರಿಕವಾಗಿ ಹಾಗೂ ಎಸ್ಎಜಿಆರ್ಆರ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆ ಆರ್ಥಿಕವಾಗಿ ನಿರ್ವಹಿಸಲು ಒಪ್ಪಿದವು. ಇದಕ್ಕೆ ವಾರ್ಷಿಕ ನಿರ್ವಹಣೆಗೆ ₹14.25 ಕೋಟಿ ನೀಡಲು ಪಾಲಿಕೆ ಒಪ್ಪಿತು’ ಎಂದರು.