ಕ್ವಾನ್ವಸ್ನಲ್ಲಿ ಚಿತ್ರಬಿಡಿಸಿದ ಮಾತ್ರಕ್ಕೆ ಯಾರೂ ಕಲಾವಿದರಾಗು ವುದಿಲ್ಲ, ಆ ಮಾಧ್ಯಮವನ್ನು ನಿಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಬಳಸಿಕೊಂಡಾಗ ನಿಜವಾದ ಕಲಾಕೃತಿ ನಿರ್ಮಾಣವಾಗುತ್ತದೆ ಎಂದರು.
ಯಾವುದೇ ಕಾರಣಕ್ಕೂ ಸ್ವಂತಿಕೆಯನ್ನು ಬಿಡಬೇಡಿ, ವಾಣಿಜ್ಯ ಉದ್ದೇಶಕ್ಕಾಗಿ ಕೆಲಸ, ವೈಯಕ್ತಿಕ ಕೆಲಸದ ಮಧ್ಯೆ ನಿಮ್ಮ ಕಲಾಕೃತಿಗಾಗಿ ಕನಿಷ್ಠ ಒಂದು ಗಂಟೆಯನ್ನಾದರೂ ಮೀಸಲಿಡಿ, ಆಗ ಈ ಕ್ಷೇತ್ರದಲ್ಲಿ ನೀವು ಬೆಳೆಯಲು ಸಾಧ್ಯವಾಗುತ್ತದೆ. ಕಲಾ ವಿದ್ಯಾರ್ಥಿಗ ಳಾಗಿರುವ ನೀವು ಕಾಲೇಜಿನಿಂದ ಹೊರ ಬಂದ ನಂತರ ಎರಡು– ಮೂರು ವರ್ಷದಲ್ಲಿ ನಿಜವಾದ ಕಲಾವಿದರಾ ಗುತ್ತೀರ ಎಂದು ಅವರು ಹೇಳಿದರು.
ಮಣಿಪಾಲದ ಪಿಯುಎಸ್ ಪ್ರಾಡಕ್ಟ್ನ ಸತೀಶ್ ಚಂದ್ರ ಮಾತನಾಡಿ, ಕಲಾವಿದ ವಿಶೇಷ ತಳಿಯಾಗಿದ್ದು ಸದ್ಯ ಕಲಾವಿದರ ಸಂಖ್ಯೆ ತುಂಬಾ ಕಡಿಮೆ ಇದೆ. ಕಲೆಗೆ ಪ್ರೋತ್ಸಾಹವೂ ನಿರೀಕ್ಷೆಯ ಮಟ್ಟದಲ್ಲಿ ಸಿಗುತ್ತಿಲ್ಲ ಮತ್ತು ಕಲಾ ಗ್ಯಾಲರಿಗಳ ಸಂಖ್ಯೆಯೂ ಕಡಿಮೆ ಇದೆ. ಮಣಿಪಾಲದಲ್ಲಿ ಆರ್ಟ್ ಅಂಡ್ ಕ್ರಾಫ್ಟ್ ಗ್ಯಾಲರಿ ಮಾಡಿ ಕಲಾವಿದರಿಗೆ ಕೆಲಸ ನೀಡಲು ಹಾಗೂ ಕಲಾಕೃತಿಗಳ ಪ್ರದರ್ಶನಕ್ಕೆ ಅವಕಾಶ ನೀಡಲು ಪ್ರಯತ್ನಿಸಲಾಗುವುದು ಎಂದರು.
ಕಲಾವಿದೆ ಪವನ ಆಚಾರ್ಯ, ಚಿತ್ರಕಲಾ ಮಂದಿರದ ಪ್ರಾಂಶುಪಾಲ ರಾಜೇಂದ್ರ ತ್ರಾಸಿ ಉಪಸ್ಥಿತರಿದ್ದರು. ಇದೇ 30ರ ವರೆಗೆ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯ ವರೆಗೆ ಕಲಾಕೃತಿಗಳ ಪ್ರದರ್ಶನ ನಡೆಯಲಿದೆ.