ಈ ಹಿನ್ನೆಲೆಯಲ್ಲಿ ರೈತರ ಬೆಳೆಯನ್ನು ಕಡಿಮೆ ಬೆಲೆಗೆ ಕೊಳ್ಳಲು ಸಂಚು ರೂಪಿಸಿಸುತ್ತಾರೆ. ಆದರೆ, ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಕೊಬ್ಬರಿ ಮಾರುಕಟ್ಟೆಯಾಗಿರುವ ತಿಪಟೂರಿನಲ್ಲಿ ಯಾವುದೇ ಕಾರಣಕ್ಕೂ ವಹಿವಾಟನ್ನು ನಿಲ್ಲಿಸುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ.
‘ಮಾರ್ಚ್ ತಿಂಗಳಲ್ಲಿ ಸೊಸೈಟಿ, ಬ್ಯಾಂಕ್ ಸಾಲ ಮರುಪಾವತಿ ಮಾಡಬೇಕು ಎಂಬ ಉದ್ದೇಶದಿಂದ ಫೆಬ್ರುವರಿ ತಿಂಗಳಲ್ಲಿ ಅಡಿಕೆಯನ್ನು ಅನಿವಾರ್ಯ
ವಾಗಿ ಕಡಿಮೆ ಬೆಲೆಗೆ ರೈತರು ಮಾರಬೇಕಾಗಿದೆ. ದೊಡ್ಡ ವ್ಯವಹಾರ ನಡೆಸುವ ಕಂಪೆನಿಗಳೇ ತಮ್ಮ ವ್ಯಾಪಾರ ವಹಿವಾಟು ನಿಲ್ಲಿಸುವುದಿಲ್ಲ. ಆದರೆ, ಅಡಿಕೆ ಮಂಡಿ ವರ್ತಕರು ಮಾರ್ಚ್ ತಿಂಗಳಲ್ಲಿ ವ್ಯಾಪಾರ ನಿಲ್ಲಿಸುವುದು ಎಷ್ಟು ಸರಿ’ ಎಂದು ನೆಂಪೆ ದೇವರಾಜ್ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.