ಗುಂಡ್ಲುಪೇಟೆ: ತಾಲ್ಲೂಕಿನ ಪಂಜನ ಹಳ್ಳಿ, ವೀರನಪುರ, ಇಂಗಲವಾಡಿ, ಬನ್ನಿತಾಳಪುರ, ಪಡಗೂರು, ಕಬ್ಬಳ್ಳಿ, ಪರಮಾಪುರ, ಶ್ಯಾನಡ್ರಳ್ಳಿ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಸಿ.ಮೋಹನ್ ಕುಮಾರಿ ಗುರುವಾರ ಮತ ಯಾಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, 80ಕ್ಕೂ ಹೆಚ್ಚು ಗ್ರಾಮಗಳಲ್ಲಿ ಮತಯಾಚನೆ ಮಾಡಿದ್ದೇನೆ. ಎಲ್ಲಾ ಕಡೆಯೂ ಅಭೂತಪೂರ್ವ ಬೆಂಬಲ ದೊರೆತಿದೆ. ಇದರಿಂದ ನನಗೆ ಹುಮ್ಮಸ್ಸು ಹೆಚ್ಚಿದೆ. ಪತಿಯ ಅಭಿವೃದ್ಧಿ ಕೆಲಸ ನೋಡಿ ಜನರು ನಿರೀಕ್ಷೆ ಮೀರಿ ಬೆಂಬಲಿಸಿದ್ದಾರೆ ಎಂದು ಹೇಳಿದರು.
ನಾನೇ ಗೀತಾ: ವೀರನಪುರದಲ್ಲಿ ಗೀತಾ ಮಹದೇವಪ್ರಸಾದ್ ಮತಯಾಚನೆಗೆ ಬರುತ್ತಿದ್ದಾರೆ ಎಂದು ಹೇಳುತ್ತಿದ್ದತೆಯೇ ಅವರನ್ನು ನೋಡಲು ಓಡಿ ಬಂದ ಅಜ್ಜಿಯನ್ನು ಬರಮಾಡಿಕೊಂಡು ಅವರು, ‘ನಾನೇ ಮಹದೇವಪ್ರಸಾದ್ ಪತ್ನಿ ಗೀತಾ, ದಯವಿಟ್ಟು ಕೈ ಗುರುತಿಗೆ ಮತ ನೀಡಿ, ನಿಮ್ಮ ಕುಟುಂಬದ ಎಲ್ಲರೂ ನನಗೆ ಮತ ನೀಡಿ’ ಎಂದು ಮನವಿ ಮಾಡಿದರು.
ಮಹದೇವಪ್ರಸಾದ್ ಕುಟುಂಬದಿಂದ ಮತಯಾಚನೆ: ಕ್ಷೇತ್ರದಾದ್ಯಂತ ಪ್ರಚಾರ ಪ್ರಾರಂಭಿಸಿರುವ ಪುತ್ರ ಗಣೇಶ್ಪ್ರಸಾದ್, ಸೊಸೆ ವಿದ್ಯಾ, ಅತ್ತಿಗೆ ಪ್ರೇಮಾ ಚಂದ್ರಾ ಚೂಡ ಪಟ್ಟಣದ 16ನೇ ವಾರ್ಡಿನಲ್ಲಿ ಮನೆಮನೆಗೆ ತೆರಳಿ ಮತಯಾಚಿಸಿದರು.
ಜಿ.ಪಂ ಸದಸ್ಯ ಮಹೇಶ್, ಪುರಸಭಾ ಮಾಜಿ ಅಧ್ಯಕ್ಷರಾದ ಪಿ.ಚಂದ್ರಪ್ಪ, ರಮೇಶ್, ಸದಸ್ಯರಾದ ಸುರೇಶ್ ಕುಮಾರ್, ನಾಗೇಂದ್ರ, ಪಿ.ಶಶಿಧರ (ದೀಪು), ಬಡಪ್ಪ ಸುರೇಶ್, ಶಾಂತಾರಾಂ ಇತರರು ಇದ್ದರು.