ಸತತ ಒಂದು ವಾರ ಅನಿಷ್ಠ ಆಚರಣೆ ನಡೆಯಲಿದೆ. ಕಳೆದ ವರ್ಷ ಬೇಲೂರು ತಾಲ್ಲೂಕಿನ ಹೆಬ್ಬಾಳ ಜಾತ್ರೆಯಲ್ಲಿ ಕಂಬ ಮುರಿದು ವ್ಯಕ್ತಿಯೊಬ್ಬ ಮೃತಪಟ್ಟಿದ್ದರು ಎಂದರು.
ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯುವುದು ಸರ್ಕಾರದ ಮೇಲಿದೆ. ದಲಿತ ಹಕ್ಕುಗಳ ಸಮಿತಿ, ಡಿಎಚ್ಎಸ್ ವತಿಯಿಂದ ಮಾರ್ಚ್ 10ರಂದು ಸಿಡಿ ಆಚರಣೆ ನಿಷೇಧಿ ಸುವಂತೆ ಸರ್ಕಾರ, ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ನೇತೃತ್ವದಲ್ಲಿ ಸಿಡಿ ಆಚರಣೆಗೆ ಅವಕಾಶ ನೀಡದಂತೆ ಭರವಸೆ ನೀಡಿದ್ದಾರೆ.
ಸಿಡಿ ಆಚರಣೆ ನಡೆದಲ್ಲಿ ಜಿಲ್ಲಾಡ ಳಿತವೇ ನೇರ ಹೊಣೆಯಾಗಲಿದ್ದು, ಇದರ ವಿರುದ್ಧ ದಲಿತ ಸಂಘಟನೆಗಳ ಆಶ್ರಯ ದಲ್ಲಿ ಬೃಹತ್ ಹೋರಾಟ ನಡೆಸ ಲಾಗುವುದು ಅವರು ಎಚ್ಚರಿಸಿದರು.
ದಲಿತ ಮಾನವ ಹಕ್ಕುಗಳ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಮರಿಜೋಸೆಫ್, ಡಿಎಸ್ಎಸ್ ಜಿಲ್ಲಾ ಸಂಚಾಲಕರಾದ ಎಂ.ಜಿ.ಪೃಥ್ವಿ, ಎಸ್.ಎಂ.ಮಲ್ಲಪ್ಪ, ಆರ್ಪಿಐ ಸತೀಶ್, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯ ಜಿಲ್ಲಾ ಸಂಚಾಲಕ ಅಂಬುಗ ಮಲ್ಲೇಶ್ ಇದ್ದರು.