ಇಂದಿರಾ ಬಯೋಪಿಕ್ಗೆ ಈಗಾಗಲೇ ಚಿತ್ರಕತೆ ತಯಾರಾಗಿದೆ. ಆದರೆ, ಇಂದಿರಾ ಕುಟುಂಬದ ಒಪ್ಪಿಗೆ ಇಲ್ಲದೇ ತಾನು ಅಭಿನಯಿಸಲಾರೆ ಎಂದು ವಿದ್ಯಾ ಕಡ್ಡಿಮುರಿದಂತೆ ಚಿತ್ರತಂಡಕ್ಕೆ ಹೇಳಿದ್ದಾರಂತೆ. ಈ ಹಿಂದೆ ಎಂ.ಎಸ್.ಸುಬ್ಬುಲಕ್ಷ್ಮಿ ಅವರ ಕುರಿತ ಬಯೋಪಿಕ್ಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಕೊನೆಯ ಗಳಿಗೆಯಲ್ಲಿ ಸುಬ್ಬುಲಕ್ಷ್ಮಿ ಅವರ ಕುಟುಂಬದಿಂದ ಒಪ್ಪಿಗೆ ಸಿಗದ ಕಾರಣ, ತೀವ್ರ ನಿರಾಸೆಗೊಳಗಾಗಬೇಕಾಯಿತು.