ಆದರೆ, ‘ಅದಿರು ಸಾಗಣೆಗೆ ಅನುಮತಿ ನೀಡಿದ್ದ ಧರಂ ಸಿಂಗ್ ಅವರು ಅದರಿಂದ ಹಣಕಾಸಿನ ಲಾಭ ಮಾಡಿಕೊಂಡಿಲ್ಲ. ಹಾಗಾಗಿ, ಅವರ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ’ ಎಂದು ಅಂದಿನ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು 2009ರ ಜೂನ್ 23ರಂದು ಆದೇಶಿಸಿದ್ದರು.
ಧರಂ ಸಿಂಗ್ ಅವರು ತಪ್ಪೆಸಗಿದ್ದಾರೆ ಎಂದು ಲೋಕಾಯುಕ್ತ ವರದಿ ಹೇಳಿದ್ದರೂ ಅವರಿಂದ ₹ 23 ಕೋಟಿ ದಂಡ ವಸೂಲಿ ಮಾಡಿಲ್ಲ ಎಂದು ದೂರಿ ವಕೀಲ ಡಿ.ನಟೇಶ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ರಾಜ್ಯ ಹೈಕೋರ್ಟ್, ದಂಡ ಪಾವತಿಸುವಂತೆ ಆದೇಶಿಸಿತ್ತು.