ಸಮಾಜ ಸೇವಕ ಕೆ.ಬಾಗೇಗೌಡರು ಧನಸಹಾಯ ಮಾಡಿದ್ದು, ಗ್ರಾನೈಟ್ ಕೊಡಿಸುವುದಾಗಿ ತಿಳಿಸಿದ್ದಾರೆ. ನೇತೇನ ಹಳ್ಳಿ ತಿಮ್ಮೇಗೌಡ ಸಿಮೆಂಟ್ ಕೊಡಿಸುತ್ತಿದ್ದಾರೆ. ಬಾಲಾಜಿ ರಂಗನಾಥ್ ಕಬ್ಬಿಣ ನೀಡಿದ್ದಾರೆ, ಜುಟ್ಟನಹಳ್ಳಿ ಚಂದ್ರೇಗೌಡ ಕಿಟಕಿ ಬಾಗಿಲು ಕೊಡಿಸಿದ್ದಾರೆ ಎಂದರು.
ಜಾತ್ರೆಯ ಸಮಯದಲ್ಲಿ ಏಕಕಾಲಕ್ಕೆ ಸಾವಿರ ಜನರು ಕುಳಿತು ಊಟ ಮಾಡುವ 180 X 80 ಅಡಿ ವಿಸ್ತೀರ್ಣದ ಭೋಜನ ಶಾಲೆ, ಕೊಠಡಿಗಳು ಇತರೆ ಸೌಲಭ್ಯ ಇರುತ್ತದೆ ಎಂದು ಕಟ್ಟಡ ನಿರ್ಮಾಣದ ಉಸ್ತುವಾಗಿ ನೋಡಿಕೊಳ್ಳುತ್ತಿರುವ ನಿವೃತ್ತ ನೌಕರ ಗಂಗಾಧರಪ್ಪ ತಿಳಿಸಿದರು. ಪುರಸಭೆಯ ಮಾಜಿ ಅಧ್ಯಕ್ಷ ಪುರುಷೋತ್ತಮ್, ಅರವಟಿಗೆ ಟ್ರಸ್ಟಿನ ಖಜಾಂಚಿ ಎಂ.ಕೆ.ಶಿವಲಿಂಗಯ್ಯ ಇದ್ದರು.