ಬಗರ್ ಹುಕುಂ ಭೂಮಿಯನ್ನು ಸರ್ವೆ ಮಾಡಿ, ನಕ್ಷೆ ಸಮೇತ ಸಮಿತಿ ಮುಂದೆ ಇಟ್ಟು ಅನುಮೋದನೆ ಪಡೆಯಬೇಕು. ನಂತರ ಕ್ರಮವಾಗಿ ಮಾಡಬಾಳ್, ಕಸಬ ಹಾಗೂ ತಿಪ್ಪಸಂದ್ರ ಹೋಬಳಿಗಳಲ್ಲಿ ಬಗರ್ ಹುಕುಂ ಭೂಮಿ ಸರ್ವೆಕಾರ್ಯ ಕೈಗೆತ್ತಿಕೊಳ್ಳುವಂತೆ ಶಾಸಕರು ತಿಳಿಸಿದರು.
ಬಗರ್ ಹುಕುಂ ಸಮಿತಿಯ ಸದಸ್ಯ ದೊಡ್ಡಯ್ಯ ಮಾತನಾಡಿ ಭೂಮಿ ಇಲ್ಲದ ರೈತರು ಬಗರ್ ಹುಕುಂ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡಿರುವವರಿಗೆ ಮೊದಲ ಆದ್ಯತೆ ನೀಡಬೇಕು ಎಂದರು.
ಸಮಿತಿಯ ಸದಸ್ಯರಾದ ಶಿವಣ್ಣ, ದೇವರಾಜಮ್ಮ ಮುಕುಂದ, ತಹಶೀಲ್ದಾರ್ ಎನ್.ಲಕ್ಷ್ಮೀಚಂದ್ರ, ಉಪತಹಶೀಲ್ದಾರ್ ಡಿ.ಟಿ.ಮಂಜುನಾಥ್, ಕಚೇರಿಯ ಶಿರಸ್ತೇದಾರ್ ಸೋಮಶೇಖರ್, ಭೂಮಾಪನಾಧಿಕಾರಿ ತಿಮ್ಮಯ್ಯ, ಕಂದಾಯ ಇಲಾಖೆಯ ಮಂಜುನಾಥ್, ಶಿವಸ್ವಾಮಿ, ರಮೇಶ್, ಗಂಗಾಧರ್, ಶಿವರುದ್ರಯ್ಯ, ಗಂಗಮಾರಯ್ಯ, ನಾರಾಯಣಸ್ವಾಮಿ, ರವಿಕುಮಾರ್, ವಲಯ ಅರಣ್ಯ ಅಧಿಕಾರಿ ದಾಳೇಶ್ ಇದ್ದರು.