ಹಿಂದೆ ತಾಳಗುಪ್ಪದಲ್ಲಿ ರಾಜರು ವಾಸವಾಗಿದ್ದ ಕಥೆಯನ್ನು ಸಿನಿಮಾ ಮಾಡುವುದೆಂದು ನಿರ್ಧರಿಸಿದಾಗ ಅವರಿಗೆ ಕೃಷ್ ರಂಗಸ್ವಾಮಿ ಅವರು ಬರೆದ ಕಥೆಯೂ ಸಿಕ್ಕಿತಂತೆ. ನಾಲ್ಕು ಹುಡುಗರು ಒಬ್ಬಳೇ ಹುಡುಗಿಯ ಹಿಂದೆ ಬೀಳುತ್ತಾರೆ. ಆದರೆ ಸಕಾರಾತ್ಮಕ ಅಂಶಗಳನ್ನು ತೋರಿಸುವುದು ನಿರ್ದೇಶಕರ ಉದ್ದೇಶ.
ನಿರಂಜನ್ಶೆಟ್ಟಿ, ಜಗದೀಶ್, ನಾಗರಾಜ್ ಹಾಗೂ ಶರಣ್ ಚಿತ್ರದ ನಾಯಕರು. ಇವರೆಲ್ಲರಿಗೂ ಒಬ್ಬಳೇ ನಾಯಕಿ ಶಾಲಿನಿ. ವಿ. ಶ್ರೀಧರ್ ಸಂಭ್ರಮ್ ಸಂಗೀತಕ್ಕೆ ಜಯಂತ ಕಾಯ್ಕಣಿ, ನಾಗೇಂದ್ರಪ್ರಸಾದ್, ಯೋಗರಾಜ್ ಭಟ್ ಹಾಡು ಬರೆದಿದ್ದಾರೆ. ಅರ್ಮಾನ್ ಮಲ್ಲಿಕ್, ಶ್ರೇಯಾ ಘೋಷಾಲ್, ಶಶಾಂಕ್ ಶೇಷಗಿರಿ ಹಾಡಿದ್ದಾರೆ.