ಕಾಸರಗೋಡು ಪ್ರಶ್ನೆ ಶೀಘ್ರ ಇತ್ಯರ್ಥ: ಮುಖ್ಯಮಂತ್ರಿ ಆಶಯ
ಮಂಗಳೂರು, ಮಾ. 26– ಕಾಸರಗೋಡು ಪ್ರಶ್ನೆಯು ಸೌಹಾರ್ದಯುತವಾಗಿ ಹಾಗೂ ಶೀಘ್ರವಾಗಿ ಬಗೆಹರಿಯುವುದೆಂಬ ಆಶಯವನ್ನು ರಾಜ್ಯದ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ವ್ಯಕ್ತಪಡಿಸಿದರು.
ಕಾಸರಗೋಡು ತಾಲ್ಲೂಕಿನ ಬಹುಭಾಗ ಮೈಸೂರಿಗೆ ಹೋಗಬೇಕೆಂಬುದನ್ನು ಅನೇಕ ಸಂದರ್ಭಗಳಲ್ಲಿ ಕೇರಳದ ವಿವಿಧ ರಾಜಕೀಯ ಪಕ್ಷಗಳ ನಾಯಕರು ಒಪ್ಪಿಕೊಂಡಿದ್ದಾರೆಂದೂ ಅವರು ಹೇಳಿದರು.
ಈಗಲೂ ಸಹ ಮಂಜೇಶ್ವರ, ಕುಂಬಳ ಫಿರ್ಕಾಗಳು ಕರ್ನಾಟಕಕ್ಕೆ ಸೇರಿದವುಗಳಾಗಿವೆಯೆಂದು ವಿವಿಧ ರಾಜಕೀಯ ಪಕ್ಷಗಳ ನಾಯಕರಲ್ಲಿ ಒಮ್ಮತವಿದೆಯೆಂದೂ, ಕಾಸರಗೋಡು ಕೆಲವು ಭಾಗಗಳನ್ನು ಕುರಿತು ಸ್ವಲ್ಪಮಟ್ಟಿನ ಚರ್ಚೆ ಹಾಗೂ ಒಪ್ಪಂದವಾಗಬೇಕಾಗಿದೆಯೆಂದೂ ಅವರು ತಿಳಿಸಿದರು.