ದುರುದ್ದೇಶದಿಂದ ಅಪಪ್ರಚಾರ ಮಾಡಿ, ಯಾರದಾದರೂ ತೇಜೋವಧೆ ಮಾಡುತ್ತಿದ್ದರೆ ಅಂತಹ ಮಾಧ್ಯಮದ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ. ತಮ್ಮ ಮೂಗಿನ ನೇರಕ್ಕೆ ಮಾಧ್ಯಮದ ಪ್ರತಿನಿಧಿಗಳು ವರ್ತಿಸಬೇಕು ಎಂದು ಪ್ರಜಾಪ್ರತಿನಿಧಿಗಳು ಬಯಸುವುದು ಸರಿಯಾದ ನಡೆಯಲ್ಲ.
-ಸುರೇಶ್ ನಾಯಕ್, ಚಾವಲ್ಮನೆ, ಕೊಪ್ಪ ತಾಲ್ಲೂಕು