ಹುಬ್ಬಳ್ಳಿ: ನಗರದ ನಾಲ್ವರು ಯುವತಿಯರು ಜೈನ ಸನ್ಯಾಸ ಸ್ವೀಕರಿಸಲು ಸಜ್ಜಾ ಗಿದ್ದು, ಮೇ ತಿಂಗಳಲ್ಲಿ ದಾವಣಗೆರೆಯಲ್ಲಿ ನಡೆಯುವ ಸಮಾರಂಭದಲ್ಲಿ ‘ವೈರಾಗಣ್’ ಆಗಲಿದ್ದಾರೆ. ದೀಕ್ಷೆಗೆ ಸಿದ್ಧರಾದ ದಿಶಾ, ಅಲ್ಫಾ, ಹರ್ಷಿತಾ ಮತ್ತು ಸುರೇಖಾ ಅವರನ್ನು ಭಾನುವಾರ ನಗರದಲ್ಲಿ ಮೆರವಣಿಗೆ ಮಾಡಲಾಯಿತು. ಕಂಚಗಾರ ಗಲ್ಲಿಯ ಜೈನ ಮಂದಿರದ ಆವರಣದಿಂದ ಹೊರಟ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಾಗಿ ಮಂದಿರ ತಲುಪಿತು.
ನಂತರ ನಡೆದ ಸಮಾರಂಭದಲ್ಲಿ ಯುವತಿಯರಿಗೆ ಪಾಲಕರು ಮತ್ತು ಸಮಾಜದ ನೂರಾರು ಮಂದಿ ಶುಭ ಕೋರಿದರು.