ಇದಕ್ಕೂ ಮುನ್ನ ಮಾತನಾಡಿದ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ, ‘ಸರ್ಕಾರ ಕೇವಲ ಕಾಯ್ದೆ ತಂದರೆ ಸಾಲದು, ಅದರ ಅನುಷ್ಠಾನಕ್ಕೆ ಬದ್ಧವಾಗಬೇಕು. ಈಗಾಗಲೇ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ ಹಕ್ಕುಪತ್ರ ನೀಡುವುದಕ್ಕಾಗಿ ಕಾಯ್ದೆ ತಂದು ನಾಲ್ಕು ವರ್ಷವಾದರೂ ಅರ್ಜಿಗಳ ಇತ್ಯರ್ಥ ಆಗಿಲ್ಲ. ಈಗ ಮತ್ತೆ ಎರಡು ವರ್ಷ ವಿಸ್ತರಿಸಲಾಗಿದೆ. ಅದೇ ರೀತಿ ಇಲ್ಲೂ ಆಗಬಾರದು’ ಎಂದರು.