‘ಅನನ್ಯ’ ಶಾಖೆ ಉದ್ಘಾಟಿಸಿದ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಅರುಣ್ ಶ್ರೀವಾಸ್ತವ ಅವರು, ‘ಬದಲಾವಣೆಗೆ ತೆರೆದುಕೊಳ್ಳದಿದ್ದರೆ ಅಸ್ತಿತ್ವವಿಲ್ಲ. ಬ್ಯಾಂಕಿಂಗ್ ವಲಯದಲ್ಲಿ ಹೆಚ್ಚುತ್ತಿರುವ ಪೈಪೋಟಿ ಮತ್ತು ಗ್ರಾಹಕರ ಬೇಡಿಕೆ ಗಮನದಲ್ಲಿಟ್ಟುಕೊಂಡು ಬದಲಾವಣೆಗೆ ತೆರೆದುಕೊಂಡಿದ್ದೇವೆ’ ಎಂದರು.
‘ಕೇವಲ ವಿನ್ಯಾಸ ಮಾತ್ರವಲ್ಲ. ಕಾರ್ಯವೈಖರಿಯಲ್ಲಿ ಆಮೂಲಾಗ್ರ ಬದಲಾವಣೆ ತರಲಾಗಿದೆ. ಸಾಲ ಮಂಜೂರಾತಿ, ಖಾತೆ ತೆರೆಯುವ ಪ್ರಕ್ರಿಯೆ ಸೇರಿದಂತೆ ಎಲ್ಲ ರೀತಿಯ ಬ್ಯಾಂಕಿಂಗ್ ವಹಿವಾಟು ಚುರುಕುಗೊಳಿಸಲಾಗಿದೆ’ ಎಂದರು. ‘ಈ ಬದಲಾವಣೆ ಬ್ಯಾಂಕ್ ವಹಿವಾಟು ಹೆಚ್ಚಿಸಲು ನೆರವಾಗಲಿದೆ’ ಎಂದು ಕಾರ್ಯನಿರ್ವಾಹಕ ನಿರ್ದೇಶಕರಾದ ರವಿಶಂಕರ್ ಪಾಂಡೆ ಮತ್ತು ಸಿಎಚ್. ಎಸ್.ಎಸ್. ಮಲ್ಲಿಕಾರ್ಜುನ ರಾವ್ ಆಶಯ ವ್ಯಕ್ತಪಡಿಸಿದರು.