ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 2–4–1967

Last Updated 1 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಉತ್ತರ ಪ್ರದೇಶ ಕಾಂಗ್ರೆಸ್‌ ಸರಕಾರದ ಪತನ: ಗುಪ್ತ ಸಂಪುಟದ ರಾಜೀನಾಮೆ

ಲಖನೌ, ಏ. 1–  ಕೇವಲ ಹದಿನೆಂಟು ದಿನಗಳ ಉತ್ತರ ಪ್ರದೇಶ ಕಾಂಗ್ರೆಸ್‌ ಸರ್ಕಾರಕ್ಕೆ ಅಕಾಲ ಮರಣ. ಮುಖ್ಯಮಂತ್ರಿ ಶ್ರೀ ಸಿ.ಬಿ. ಗುಪ್ತ ಅವರು ಇಂದು ಸಂಜೆ ರಾಜ್ಯಪಾಲರಿಗೆ ತಮ್ಮ ಸಂಪುಟದ ರಾಜೀನಾಮೆ ಸಲ್ಲಿಸಿದರು.

18 ಜನ ಕಾಂಗ್ರೆಸ್‌ ಶಾಸಕರ ಪಕ್ಷ ತ್ಯಾಗ ಹಾಗೂ ರಾಜ್ಯಪಾಲರ ಭಾಷಣಕ್ಕೆ ವಿರೋಧ ಪಕ್ಷಗಳು ಸೂಚಿಸಿದ ತಿದ್ದುಪಡಿಯ ಅಂಗೀಕಾರವೇ ಇದಕ್ಕೆ ಕಾರಣ.

***

ತುರ್ತುಪರಿಸ್ಥಿತಿ ಅಂತ್ಯದ ನಂತರ ನಗರ ಸಭೆಗಳಿಗೆ ಚುನಾವಣೆಗೆ ಕ್ರಮ ಎಂದು ಪಾಟೀಲ್‌

ಬೆಂಗಳೂರು, ಏ. 1– ತುರ್ತುಪರಿಸ್ಥಿತಿ ಅಂತ್ಯವಾದ ನಂತರ, ರಾಜ್ಯದಲ್ಲಿನ ನಗರಸಭೆಗಳಿಗೆ ಹಾಗೂ ತಾಲ್ಲೂಕು ಮಂಡಳಿಗಳಿಗೆ ಚುನಾವಣೆಗಳನ್ನು ನಡೆಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದೆಂದು ಪೌರಾಡಳಿತ ಸಚಿವ ಶ್ರೀ ಆರ್‌.ಎಂ. ಪಾಟೀಲ್‌ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT