‘ಜಾತಿ ಪದ್ಧತಿಯಿಂದ ಮೇಲ್ವರ್ಗ ಹಾಗೂ ಕೆಳವರ್ಗ ಎರಡಕ್ಕೂ ಸಮಾಧಾನವಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಎಲ್ಲ ಹಿರಿಯ ಧೀಮಂತ ನಾಯಕರು ಜಾತಿ ವಿನಾಶಕ್ಕೆ ಒತ್ತು ನೀಡಿದ್ದರು. ಅಲ್ಲದೇ, ಜಾತಿ ರಹಿತ ಸಮಾಜ ಕಟ್ಟುವ ಆಸೆ ಇಟ್ಟುಕೊಂಡಿದ್ದರು. ಆದರೆ, ಇತ್ತೀಚೆಗೆ ಜಾತಿ ಮತ್ತು ಕೋಮು ಭಾವನೆ ಬೆಳೆಯುತ್ತಿರುವುದನ್ನು ನೋಡಿದರೆ ಆತಂಕವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.