ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್ 14ರಿಂದ ‘ಚಕ್ರವರ್ತಿ’ ಆಡಳಿತ ಶುರು

ಅರ್ಜುನ್ ಜನ್ಯ ಸಂಗೀತ
Last Updated 6 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಚಿಂತನ್ ನಿರ್ದೇಶನದ ದರ್ಶನ್ ಹಾಗೂ ದೀಪಾ ಸನ್ನಿಧಿ ಅಭಿನಯದ ‘ಚಕ್ರವರ್ತಿ’ ಕನ್ನಡ ಸಿನೆಮಾ ಏಪ್ರಿಲ್‌ 14ಕ್ಕೆ ತೆರೆಗೆ ಬರಲು ಸಜ್ಜುಗೊಂಡಿದೆ. ಈಗಾಗಲೇ ಸೆನ್ಸಾರ್‌ ಪ್ರಮಾಣಪತ್ರವನ್ನೂ ಪಡೆದುಕೊಂಡಿದೆ. 
 
ಈ ಚಿತ್ರದಲ್ಲಿ ದರ್ಶನ್ ಅವರನ್ನು ಮೂರು ವಿಭಿನ್ನ ಸಮಯ, ಮೇಕಪ್ಪ್‌ನಲ್ಲಿ ಕಾಣಬಹುದು.
 
ದರ್ಶನ್‌ ಅವರ ಸಹೋದರ ದಿನಕರ್ ತೂಗುದೀಪ ಖಳನಟನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಈ ಸಿನಿಮಾದ ಇನ್ನೊಂದು ವಿಶೇಷ. ಸಿದ್ದಾಂತ್, ಕುಮಾರ್ ಬಂಗಾರಪ್ಪ, ಸೃಜನ್ ಲೋಕೇಶ್, ಆದಿತ್ಯ, ಯಶಸ್, ಶರತ್ ಲೋಹಿತಾಶ್ವ  ತಾರಾಗಣದಲ್ಲಿ ಇದ್ದಾರೆ.  

ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಈ ಸಿನಿಮಾಕ್ಕೆ ಕೆ. ಎಸ್. ಚಂದ್ರಶೇಖರ್ ಛಾಯಾಗ್ರಹಣ ಮಾಡಿದ್ದಾರೆ. ಕೆ ಎಂ ಪ್ರಕಾಶ್ ಅವರ ಸಂಕಲನ, ವಿ. ನಾಗೇಂದ್ರ ಪ್ರಸಾದ್ ಅವರ ಗೀತ ಸಾಹಿತ್ಯ, ಫಳಣಿ ರಾಜ್ ಅವರ ಸಾಹಸ ‘ಚಕ್ರವರ್ತಿ’ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT