ಹಳೆಯ ತೇರು ಶಿಥಿಲವಾಗಿತ್ತು. ಭಕ್ತರ ನೆರವಿನೊಂದಿಗೆ ಅಂದಾಜು ₹ 10 ಲಕ್ಷ ವೆಚ್ಚದಲ್ಲಿ ರಥ ನಿರ್ಮಾಣ ಮಾಡಲಾಗಿದೆ. ರಥವನ್ನು ಬಣ್ಣಬಣ್ಣದ ಬಾವುಟ, ಪತಾಕೆ, ಎಳೆನೀರು ಮತ್ತು ಬಾಳೆ ಗೊನೆಗಳು, ವಿಶೇಷ ಹೂವು ಗಳಿಂದ ಅಲಂಕರಿಸಲಾಗಿತ್ತು. ಬೆಳಿಗ್ಗೆ ಯಿಂದಲೇ ದೇಗುಲದಲ್ಲಿ ಅಭಿಷೇಕ ಸೇರಿ ದಂತೆ ವಿಶೇಷ ಪೂಜೆ ಹಮ್ಮಿ ಕೊಳ್ಳಲಾಗಿತ್ತು.