ಅಖಂಡ ಭಾರತದಲ್ಲಿ ಪಾಕಿಸ್ತಾನ, ಶ್ರೀಲಂಕಾ ಹಾಗೂ ಬರ್ಮಾ ದೇಶಗಳೂ ಇವೆ. ನಕ್ಷೆಯಲ್ಲಿ ಅರಬ್ಬಿ ಸಮುದ್ರದಲ್ಲಿ ದಿಕ್ಸೂಚಿಯ ಚಿತ್ರ ಮುದ್ರಿಸಿ ಮದುವೆ ದಿನಾಂಕ, ಮುಹೂರ್ತ ಹಾಗೂ ಸ್ಥಳ ಮುದ್ರಿಸಿದ್ದಾರೆ. ಜೋಡು ಕಾಗದದ ಮುಂಭಾಗದಲ್ಲಿ ಅಖಂಡ ಭಾರತದ ನಕ್ಷೆ ಇದ್ದರೆ, ಹಿಂಬದಿಗೆ ಹಿಮಾಲಯ ಪರ್ವತ ಪ್ರದೇಶದ ಪರಿಕಲ್ಪನೆಗೆ ಹಸಿರು ಬಣ್ಣ ತುಂಬಲಾಗಿದೆ. ಇಲ್ಲಿ ಸಾಮಾಜಿಕ ಸಮಾನತೆ ಪ್ರತಿಪಾದಿಸಿದ ಬಸವೇಶ್ವರ, ಭಗವಾ ಧ್ವಜ ಹಿಡಿದ ಸಿಂಹಾರೂಢ ಭಾರತಮಾತೆ ಹಾಗೂ ಪಕ್ಕದಲ್ಲಿ ದೇಶ ಪ್ರೇಮಿ ಸ್ವಾಮಿ ವಿವೇಕಾನಂದರ ಚಿತ್ರ ಇದೆ.