ಚಾಮರಾಜನಗರ: ‘ಭಗವಾನ್ ಮಹಾವೀರರು ಜಗತ್ತಿಗೆ ಅಹಿಂಸಾ ಧರ್ಮ ಸಾರಿದ ಮಹಾನ್ ಸಂತ. ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ’ ಎಂದು ಬಿಜೆಪಿ ಜಿಲ್ಲಾ ಮಂಡಲ ಅಧ್ಯಕ್ಷ ಎಚ್.ಎಂ. ಬಸವಣ್ಣ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಭಗವಾನ್ ಮಹಾವೀರರ ಜಯಂತಿ ಕಾರ್ಯಕ್ರಮದಲ್ಲಿ ಮಹಾವೀರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಮಹಾವೀರರು ಜಗತ್ತಿಗೆ ಅಹಿಂಸಾ ತತ್ವ ನೀಡಿದ್ದಾರೆ. ಪ್ರಾಣಿ ಹಿಂಸೆ ಮಾಡ ಬಾರದು. ಭೂಮಿಯಲ್ಲಿ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ ಎಂದು ಪ್ರತಿಪಾದಿಸಿದ್ದಾರೆ. ಅವರ ತತ್ವಾದರ್ಶ ವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಮಂಡಲ ಉಪಾಧ್ಯಕ್ಷ ಅಮಚವಾಡಿ ಚಂದ್ರಶೇಖರ್, ಮುಖಂಡರಾದ ಸಿ.ಎಸ್.ಮಹದೇವನಾಯಕ, ಶಿವಣ್ಣ, ಸುಂದರರಾಜ್, ಪವನ್ ಜೈನ್, ರಾಮ ಸಮುದ್ರ ಶಿವಣ್ಣ, ಸುಬ್ರಮಣ್ಯ ಹಾಗೂ ಪ್ರಕಾಶ್ ಸೇರಿದಂತೆ ಇತರರು ಹಾಜರಿದ್ದರು.