‘ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಶಿರಾ ತಾಲ್ಲೂಕಿನ ಸ್ಥಳೀಯ ಸಂಸ್ಥೆಗಳು ನಿಯಮಾನುಸಾರ ಕ್ರಿಯಾ ಯೋಜನೆ ರೂಪಿಸಿವೆ. ಮಧುಗಿರಿ ಪುರಸಭೆ ಅಧಿಕಾರಿಗಳು ಸರ್ಕಾರಿ ನೌಕರರ ಭವನದ ಮುಂದುವರಿದ ಕಾಮಗಾರಿ, ಸರ್ಕಾರಿ ಶಾಲೆ ಸಭಾ ಭವನದ ಮುಂದುವರಿದ ಭಾಗ, ಸರ್ಕಾರಿ ಶಾಲೆಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಸೇರಿಸಿದ್ದಾರೆ. ಇದು ನಿಯಮಾವಳಿಯ ಉಲ್ಲಂಘನೆಯಾಗಿದೆ’ ಎಂದು ಅನುಪಮಾ ಹೇಳಿದರು.ಇದಕ್ಕೆ ಸಚಿವರು ಪ್ರತಿಕ್ರಿಯಿಸಿ, ‘ಶಿಕ್ಷಣ ಇಲಾಖೆಯಲ್ಲೂ ಅನುದಾನದ ಕೊರತೆ ಇದೆ. ಪಟ್ಟಿಯನ್ನು ಅನುಮೋದನೆ ಮಾಡಿ, ಪರಿಶೀಲನೆಗೆ ಕಳುಹಿಸಿಕೊಡಿ’ ಎಂದು ಸೂಚಿಸಿದರು.