ಕುಣಿಗಲ್: ಪತಿಯ ವಿರುದ್ಧ ತಾವು ನೀಡಿರುವ ದೂರನ್ನು ದಾಖಲಿಸದಂತೆ ಮನವಿ ಮಾಡಿ ಠಾಣೆಯಿಂದ ಹೊರ ಹೋದ ಮಹಿಳೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಾಲ್ಲೂಕಿನ ಹೆಗ್ಗಡತಿಹಳ್ಳಿ ವಾಸಿ ವನಿತಾ (25) ಮೃತರು. ಪತಿ ಸುರೇಶ್ ಕೆಲದಿನಗಳಿಂದ ದೂರವಾಗಿದ್ದರು. ಈ ಬಗ್ಗೆ ವನಿತಾ ದೂರು ನೀಡಿದ್ದು, ಪೊಲೀಸರು ಆಪ್ತ ಸಮಾಲೋಚನೆಗೆ ಶಿಫಾರಸು ಮಾಡಿದ್ದರು.
ಶನಿವಾರ ಪೊಲೀಸರು ಸುರೇಶ್ನನ್ನು ಕರೆತಂದು ವಿಚಾರಣೆ ನಡೆಸುವಾಗ ಠಾಣೆಗೆ ಹೋದ ಪತ್ನಿ, ದೂರು ದಾಖಲಿಸದಂತೆ ಮನವಿ ಮಾಡಿದ್ದರು. ಕೆಲ ಸಮಯದ ಬಳಿಕ ಸಾರ್ವಜನಿಕ ಆಸ್ಪತ್ರೆ ಬಳಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆಟೊ ಚಾಲಕ ಮಂಜು ಎಂಬುವರು ಆಸ್ಪತ್ರೆಗೆ ದಾಖಲಿಸಿದ್ದರು.