ಬಿಜೆಪಿ ಮುಖಂಡ ಶಿವಶಂಕರಗೌಡ ಹಿರೇಗೌಡ್ರ, ಶಂಕರಲಿಂಗಯ್ಯ ಹಿರೇಮಠ, ಜಿ.ಪಂ. ಮಾಜಿ ಸದಸ್ಯ ಗಂಗಾಧರ ನಾಡಗೌಡ ಮತ್ತಿತರರು ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಶಿವಪ್ರಕಾಶ ಶಿವಾಚಾರ್ಯ, ಗುರುಶಾಂತ ವೀರ ಶಿವಾಚಾರ್ಯ ಆಶೀರ್ವಚನ ನೀಡಿದರು. ಸಂಘದ ಅಧ್ಯಕ್ಷ ಗೌರಿಶಂಕರ ಪುರಾಣಿಕಮಠ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷ ಬಸನ ಗೌಡ ಪಾಟೀಲ, ಜಂಗಮ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಚಂದ್ರಕಾಂತ ಹಿರೇಮಠ, ಸಾಹಿತಿ ಪ್ರೊ.ಬಿ.ಎಂ. ಹಿರೇಮಠ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶರಣಯ್ಯ ಬೂದಿಹಾಳಮಠ, ಎಸ್.ಜಿ.ಪಾಟೀಲ, ಸಂಗಣ್ಣ ಕಂಚ್ಯಾಣಿ, ವಿಜಯ ವಡವಡಗಿ, ಪವಾಡೆಪ್ಪ ಮಡಿವಾಳರ, ಮುತ್ತಣ್ಣ ಪ್ಯಾಟಿಗೌಡರ, ಕೆ.ಎಸ್.ಗೌಡರ, ಬಸವರಾಜ ಅಬ್ಬಿಹಾಳ ಇದ್ದರು.