ಜಿಲ್ಲಾ ಪಂಚಾಯಿತಿ ವತಿಯಿಂದ 80 ಕೊಳವೆ ಬಾವಿ ಕೊರೆಸಿ, ನೀರು ಸರಬರಾಜಿಗೆ ಅನುಕೂಲ ಮಾಡಿಸಿದ್ದೇವೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜೇಶ್, ಜಿಲ್ಲಾ ಪಂಚಾಯಿತಿ ಸಿಇಒ, ಅವರನ್ನು ಮಂಚನಬೆಲೆಗೆ ಕರೆಸಿಕೊಂಡು 33 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಕಾಮಗಾರಿಯ ಮುಂದುವರೆದ ಕಾಮಗಾರಿಗೆ ₹60ಲಕ್ಷ ಮಂಜೂರಾಗಿದೆ. ಟೆಂಡರ್ ಸಹ ಕರೆಯಲಾಗಿದೆ.
₹3ಲಕ್ಷ ಸ್ವಂತ ಹಣ ಖರ್ಚು ಮಾಡಿ ನೀರು ಸರಬರಾಜು ಮಾಡುವ ಸಿಬ್ಬಂದಿಗೆ ವೇತನ ನೀಡಿದ್ದೇವೆ. ಅತ್ತಿಂಗೆರೆ ಮತ್ತು ಉಡುವೆಗೆರೆ ಗ್ರಾಮಗಳಿಗೆ ₹1.90 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರು ಸರಬರಾಜು ಕಾಮಗಾರಿ ನಡೆಯುತ್ತಿದೆ’ ಎಂದರು.
‘ಎಚ್.ಡಿ.ಕುಮಾರಸ್ವಾಮಿ ಅವರು ನಮ್ಮ ಮನೆಗೆ ಭೇಟಿ ನೀಡಿದುದು ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಕೆಂಗಣ್ಣಿಗೆ ಗುರಿಯಾಗಿದೆ. ಎಚ್.ಸಿ.ಬಾಲಕೃಷ್ಣ ಅವರು 4 ಬಾರಿ ಶಾಸಕರಾಗಿದ್ದವರು. ತಾಲ್ಲೂಕಿನ ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಿಸಿಲ್ಲ ಎಂದು ನಮ್ಮನ್ನು ದೂರುವುದಾದರೆ, ಶಾಸಕರಾಗಿ 20 ವರ್ಷಗಳಿಂದ ತಾವೇನು ಮಾಡಿದ್ದೀರಿ? ಎಂದು ಮತದಾರರು ಕೇಳುವ ಕಾಲ ಬರಲಿದೆ’ ಎಂದು ತಿಳಿಸಿದರು.