ಹಲವು ವಿಚಾರ ಗಳಲ್ಲಿ ಅದು ಕುಂದಾಪುರವನ್ನು ಅವಲಂಬಿಸಿದೆ. ಎರಡರ ನಡುವೆ ಉತ್ತಮ ಸಾರಿಗೆ ಸಂಪರ್ಕವಿದೆ. ಎರಡನ್ನು ಬೇರ್ಪ ಡಿಸುವ ನದಿಗೆ ಸೇತುವೆಯಾದರೆ ಅಂತರ ನಿವಾರಣೆಯಾಗಿ ಒಂದೇ ಎನಿಸಲಿವೆ.
ನೂತನ ತಾಲ್ಲೂಕಿಗೆ ಸೇರುವುದರಿಂದ ಗಂಗೊಳ್ಳಿಯ ಜನರಿಗೆ ತುಂಬ ಅನನು ಕೂಲವಾಗುತ್ತದೆ. ಜನರ ವಿರೋಧ ಲೆಕ್ಕಿ ಸದೆ ಆಡಳಿತ ಈ ವಿಚಾರದಲ್ಲಿ ಮುಂದು ವರಿದರೆ ಪ್ರಬಲ ವಿರೋಧ ಎದುರಿಸ ಬೇಕಾಗುತ್ತದೆ’ ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಸುರೇಂದ್ರ ಖಾರ್ವಿ, ಜಮಾತ್ ಅಧ್ಯಕ್ಷ ಜಿ. ಮಹಮದ್ ರಫೀಕ್, ಹಿಂಜಾವೇ ಉಡುಪಿ ಜಿಲ್ಲಾ ಸಹಸಂಚಾಲಕ ಟಿ. ವಾಸುದೇವ ದೇವಾಡಿಗ, ಗ್ರಾಮ ಪಂಚಾಯಿತಿ ಸದಸ್ಯ ಮುಜಾಹಿದ್ ನಾಕುದಾ, ಮಾಜಿ ಸದಸ್ಯ ಉಮಾನಾಥ ದೇವಾಡಿಗ, ನ್ಯಾಯಾಲಯದ ನಿವೃತ್ತ ಶಿರಸ್ತೆದಾರ್ ಜಿ. ಭಾಸ್ಕರ ಕಲೈಕಾರ್, ಚರ್ಚ್ ಪಾಲನಾ ಮಂಡಳಿಯ ಸದಸ್ಯೆ ಪ್ರೀತಿ ಫೆರ್ನಾಂಡಿಸ್, ರೋಟರಿ ಅಧ್ಯಕ್ಷ ಎಂ. ಜಿ. ರಾಘವೇಂದ್ರ ಭಂಡಾರ್ಕಾರ್ ಈ ವಿಚಾರದಲ್ಲಿ ಜನಪ್ರತಿನಿಧಿಗಳ ಮೂಲಕ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದರು.
ಗ್ರಾಮ ಪಂಚಾಯಿತಿ ಆಡಳಿತಾಧಿ ಕಾರಿ ಸೀತಾರಾಮ ಶೆಟ್ಟಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾ ಯಿತು. ಸಮಿತಿ ಸಂಚಾಲಕ ಬಿ. ರಾಘ ವೇಂದ್ರ ಪೈ ಸ್ವಾಗತಿಸಿ, ಗ್ರಾಮ ಪಂಚಾ ಯಿತಿ ಸದಸ್ಯ ಲಕ್ಷ್ಮೀಕಾಂತ ಮಡಿವಾಳ ವಂದಿಸಿದರು. ಸಮಿತಿ ಅಧ್ಯಕ್ಷ ಎಚ್. ಎಸ್. ಚಿಕ್ಕಯ್ಯ ಪೂಜಾರಿ, ಅಭಿವೃದ್ಧಿ ಅಧಿಕಾರಿ ಮಾಧವ, ಸದಸ್ಯರು, ಗ್ರಾಮ ಕರಣಿಕ ರಾಘವೇಂದ್ರ ದೇವಾಡಿಗ, ಸಂಘಟನೆಗಳ ಪ್ರಮುಖರು ಇದ್ದರು.