ಜನರು ಇದರ ಕುರಿತು ಮಾಡಿಕೊಂಡ ಮನವಿಗೆ ಸ್ಪಂದಿಸದಿರುವುದನ್ನು ಅವರ ಗಮನಕ್ಕೆ ತಂದಾಗ ಅವರು ಅಧಿಕಾರಿ ಗಳನ್ನು ಎಚ್ಚರಿಸಿದರಲ್ಲದೆ ಅಗತ್ಯ ಕಂಡರೆ ಜನರ ಜತೆ ಸೇರಿ ಪ್ರತಿಭಟಿಸುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಬೈಂದೂರು ಮೂಕಾಂಬಿಕಾ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಕೆ. ವೆಂಕಟೇಶ ಕಿಣಿ ಬೈಂದೂರು ನಿಲ್ದಾಣವನ್ನು ಹೆರಿಟೇಜ್ ನಿಲ್ದಾಣವಾಗಿ ಪರಿವರ್ತಿಸುವಂತೆ ಮನವಿ ಸಲ್ಲಿಸಿದರು. ಈ ಕುರಿತು ಸಚಿವರೊಂದಿಗೆ ಮಾತುಕತೆ ನಡೆಸಿ ಕ್ರಮಕ್ಕೆ ಒತ್ತಾಯಿಸುವುದಾಗಿ ಯಡಿಯೂರಪ್ಪ ಭರವಸೆಯಿತ್ತರು. ಸಂಘದ ಸದಸ್ಯ ಪ್ರಕಾಶ್, ಉದ್ಯಮಿ ಬಿ. ಜಿ. ಕಮಲೇಶ್ ಇತರರು ಇದ್ದರು.