ಕೆಪಿಸಿಸಿ ಅಧ್ಯಕ್ಷ, ಗೃಹ ಸಚಿವ, ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಜಿ.ಪರಮೇಶ್ವರ್ ಅವರು ಪಕ್ಷ ಮತ್ತು ಸರ್ಕಾರದಲ್ಲಿ ತ್ರಿಪಾತ್ರ ನಿರ್ವಹಿಸುತ್ತಿದ್ದಾರೆ. ಹೀಗೆ ಮೂರು ಜವಾಬ್ದಾರಿ ವಹಿಸಿಕೊಂಡರೆ ಯಾವುದಕ್ಕೂ ನ್ಯಾಯ ಒದಗಿಸುವುದಕ್ಕೆ ಆಗದು ಎಂದ ಅವರು, ‘ನಾನು ಜೆಡಿಎಸ್ಗೆ ಸೇರುತ್ತಿದ್ದೇನೆ. ಪಿರಿಯಾ ಪಟ್ಟಣ ಕ್ಷೇತ್ರದಿಂದ ಟಿಕೆಟ್ ಪಡೆದು ಸ್ಪರ್ಧಿಸಲಿದ್ದೇನೆ ಎಂಬುದು ಕೇವಲ ವದಂತಿ’ ಎಂದು ವಿವರಿಸಿದರು.