ಮಹಮದ್ ಸಾಧಿಕ್ ಈ ವಿಷಯಕ್ಕೆ ಸಂಬಂಧಿಸಿದಂತೆ ಎಸಿಬಿ ಪೊಲೀಸರಿಗೆ ದೂರು ದಾಖಲಿಸಿದ್ದರು. ಕಚೇರಿ ಸಿಬ್ಬಂದಿ ಜತೆ ನಡೆಸಿದ ಮಾತುಕತೆಯಂತೆ ಮಲ್ಲಪ್ಪ ಸುಕಾಲಿಗೆ ಲಂಚ ನೀಡುವ ಸಂದರ್ಭ ಎಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಎಸಿಬಿ ಡಿವೈಎಸ್ಪಿ ಮಲ್ಲೇಶ ದೊಡಮನಿ, ಇನ್ಸ್ಪೆಕ್ಟರ್ಗಳಾದ ಲೋಕೇಶ್ವರಪ್ಪ, ಮಲ್ಲಯ್ಯ ಮಠಪತಿ ‘ಪ್ರಜಾವಾಣಿ’ಗೆ ತಿಳಿಸಿದರು.