ರಾಷ್ಟ್ರಪತಿ ಸ್ಥಾನಕ್ಕೆ 20 ನಾಮಪತ್ರಗಳು
ನವದೆಹಲಿ, ಏ. 13– ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಸ್ಥಾನಕ್ಕೆ ನಾಮಪತ್ರ ಸ್ವೀಕರಿಸುವುದು ಇಂದು ಸಂಜೆಗೆ ಮುಕ್ತಾಯವಾಗಿದ್ದು ರಾಷ್ಟ್ರಪತಿ ಸ್ಥಾನಕ್ಕೆ 20 ಮಂದಿಯೂ ಮತ್ತು ಉಪರಾಷ್ಟ್ರಪತಿ ಸ್ಥಾನಕ್ಕೆ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ.
ಉಪರಾಷ್ಟ್ರಪತಿ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆ ನಡೆಯಲಿದೆ.
ಡಾ. ಜಾಕಿರ್ ಹುಸೇನ್ರಿಗೆ ಮತ ನೀಡುವಂತೆ ಇಂದಿರಾಜಿ ಮನವಿ
ನವದೆಹಲಿ, ಏ. 13– ರಾಷ್ಟ್ರಪತಿ ಚುನಾವಣೆಯಲ್ಲಿ ಡಾ. ಜಾಕಿರ್ ಹುಸೇನ್ ಅವರಿಗೆ ಮತ ನೀಡುವಂತೆ ಪಾರ್ಲಿಮೆಂಟ್ ಸದಸ್ಯರು ಮತ್ತು ರಾಜ್ಯ ವಿಧಾನ ಮಂಡಲಗಳ ಸದಸ್ಯರಿಗೆ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ಮನವಿ ಮಾಡಿಕೊಂಡಿದ್ದಾರೆ.
ಕಾಸರಗೋಡಿನ ಪ್ರಶ್ನೆ
ಬೆಂಗಳೂರು, ಏ. 13– ‘ಒಮ್ಮೆ ಇತ್ಯರ್ಥವಾದ ಪ್ರಶ್ನೆಯನ್ನು ಮತ್ತೆ ಅನುಸರಿಸಿದ ನೀತಿ ತಪ್ಪಾಗಿತ್ತು ಎಂಬುದನ್ನು ಪ್ರಥಮತಃ ಒಪ್ಪಿಕೊಳ್ಳಬೇಕಾಗುತ್ತದೆ’.
ಮೈಸೂರು–ಕೇರಳಗಳ ನಡುವಿರುವ ಕಾಸರಗೋಡು ಪ್ರಶ್ನೆಯ ಬಗ್ಗೆ ಕೇರಳದ ಅರ್ಥ ಸಚಿವ ಶ್ರೀ ಕುಂಜು ಅವರ ಅಭಿಪ್ರಾಯವಿದು.