ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಬದಿ ಬಣವೆ: ಸಂಚಾರಕ್ಕೆ ತೊಂದರೆ

Last Updated 14 ಏಪ್ರಿಲ್ 2017, 9:53 IST
ಅಕ್ಷರ ಗಾತ್ರ

ಮುನಿರಾಬಾದ್‌: ಸಮೀಪದ ಶಿವಪುರ–ಮಹ್ಮದ್‌ನಗರ ರಸ್ತೆಯಲ್ಲಿ ಕವಳಿ ಗ್ರಾಮದ ಹತ್ತಿರ ಭತ್ತದ ಹುಲ್ಲಿನ ಬಣವೆಗಳನ್ನು ರಸ್ತೆ ಬದಿ ಸಂಗ್ರಹಿಸಲಾಗಿದೆ. ಇದರಿಂದ ಸಂಚಾರಕ್ಕೆ ತೊಂದರೆಯಾಗಿದ್ದು ಜೊತೆಗೆ ಬೆಂಕಿ ಅನಾಹುತ ಸಂಭವಿಸುವ ಅಪಾಯವೂ ಎದುರಾಗಿದೆ.

ರಸ್ತೆಯ ಒಂದು ಬದಿ ಬಣವೆಗಳು ಆಕ್ರಮಿಸಿಕೊಂಡಿವೆ. ಇಲ್ಲಿ ಓಡಾಡುವ ವಾಹನಗಳ ಸೈಲೆನ್ಸರ್‌ ಕೊಳವೆಯಿಂದ ಅಥವಾ ರಸ್ತೆಯಲ್ಲಿ ಹೋಗುವ ಸಾರ್ವಜನಿಕರು ಸೇದಿ ಬಿಸಾಡುವ ಬೀಡಿ, ಸಿಗರೇಟ್‌ ತುಂಡುಗಳಿಂದ ಆಕಸ್ಮಿಕವಾಗಿ ಬೆಂಕಿಯ ಕಿಡಿ ಏನಾದರೂ ಹಾರಿ ಬಣವೆಗೆ ತಗುಲಿದರೆ ಸಾಲಾಗಿ ಸಂಗ್ರಹಿಸ ಲಾಗಿರುವ ಎಲ್ಲಾ ಬಣವೆಗಳು ಬೆಂಕಿಯ ಜ್ವಾಲೆಗೆ ಬಲಿಯಾಗುವ ಸಾಧ್ಯತೆಯಿದೆ.

ಎರಡೂ ಗ್ರಾಮಗಳ ಸ್ಥಳೀಯ ಆಡಳಿತವಾದ ಗ್ರಾ.ಪಂ ಇದರ ಕಡೆ ಗಮನಹರಿಸಿ ಬಣವೆಗಳ ಸ್ಥಳಾಂತರಿಸಬೇಕು. ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆ ಬೆಂಕಿ ಅವ ಘಡ ಸಂಭವಿಸುವ  ಸ್ಥಳಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT