ಕರಿಯಮ್ಮ ದೇವಿ ಮೂಲ ಸನ್ನಿಧಿ ಹಾಗೂ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ದೋಣನಕಟ್ಟೆ, ಕಡಲಮಗೆ, ಕೆ.ಶಂಕರನಹಳ್ಳಿ, ಪಾಳ್ಯ, ಬೆಣ್ಣಿಗುಂಡಿಹಳ್ಳಿ, ಕುಂಬಾರಗಟ್ಟೆ, ಮದ್ದರಹಳ್ಳಿ, ಪಿ.ಹೊಸಹಳ್ಳಿ ಮಾಡಾಳು ಸೇರಿದಂತೆ ಸುತ್ತಮುತ್ತಲ ಹನ್ನೆರಡು ಹಳ್ಳಿಗಳ ಗ್ರಾಮಸ್ಥರು ಹಾಗೂ ವಿವಿಧೆಡೆಯ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.