‘ಆರ್ಥಿಕವಾಗಿ ದುರ್ಬಲರಾದರೆ ಎಲ್ಲ ಸಮುದಾಯದವರು ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ. ಶಿಕ್ಷಣದಲ್ಲಿ ಮುಂದುವ ರೆದರೆ ಒಳ್ಳೆಯ ಅವಕಾಶಗಳು ಲಭಿಸುತ್ತವೆ ಎಂಬುದು ಇಬ್ಬರು ಮಹಾತ್ಮರ ಚಿಂತನೆಯಾಗಿತ್ತು. ಪ್ರತಿಭೆಯ ಜತೆಗೆ ಸ್ಪಷ್ಟ ಗ್ರಹಿಕೆ, ಒಳನೋಟ, ತತ್ವ ಬದ್ಧತೆ, ನಿಷ್ಠೆಗಳನ್ನು ಉಳ್ಳವರು, ತಾವು ಬಂದ ಸಮುದಾಯದ ನೋವು, ಅಸಮಾನತೆ, ವರ್ಣವ್ಯವಸ್ಥೆ ಸೃಷ್ಟಿಸಿದ ಕಠೋರ ಸನ್ನಿವೇಶ ಎಲ್ಲವನ್ನೂ ಅರಿವು ಪ್ರಬುದ್ಧ ಚಿಂತನೆ ಅವರಲ್ಲಿತ್ತು’ ಎಂದರು.