‘ಅಂಬೇಡ್ಕರ್ ಹಾಗೂ ಬಾಬೂಜಿ ಜಯಂತಿ ಆಚರಣೆ ಅಂಗವಾಗಿ ಇಬ್ಬರು ನಾಯಕರ ಭಾವಚಿತ್ರಗಳ ಮೆರವಣಿಗೆಗೆ ಈ ಟ್ರ್ಯಾಕ್ಟರ್ ಬಳಸಲಾಗಿತ್ತು. ಈ ಹಿಂದೆಯೂ ಇದೇ ರೀತಿಯ ಪ್ರಮಾದ ನಡೆದಿತ್ತು. ಆದರೂ, ಎಚ್ಚೆತ್ತುಕೊಳ್ಳದ ತಾಲ್ಲೂಕು ಆಡಳಿತ ಮತ್ತೆ ಅದೇ ಪ್ರಮಾದ ಮಾಡಿದೆ. ಅಲ್ಲದೇ, ಕಾರ್ಯಕ್ರಮಕ್ಕೆ ಸಮಾಜದ ಮುಖಂಡರನ್ನು ಆಹ್ವಾಸಿಲ್ಲ. ಸಮುದಾಯಕ್ಕೆಮೀಸಲಾದ ಹಣದ ದುರುಪಯೋಗ ನಡೆಯುತ್ತಿದೆ’ ಎಂದು ಪ್ರತಿಭಟನಾಕಾರರು ದೂರಿದರು.