‘ಜಗಲಿ ಅವರ ನೇಮಕದ ಬಗ್ಗೆ ರಾಜ್ಯ ಕುರುಬರ ಸಂಘವನ್ನು ಸಂಪರ್ಕಿಸಿದಾಗ ಅವರಿಗೆ ಯಾವುದೇ ಮಾಹಿತಿಯೇ ಇಲ್ಲ. ಅಧ್ಯಕ್ಷರಾಗಿ ನೀವೇ ಮುಂದುವರೆಯಿರಿ, ನಿಮ್ಮನ್ನು ಬದಲಾವಣೆ ಮಾಡುವ ಪ್ರಸಂಗವೇ ಇಲ್ಲ ಎಂದು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು. ಮುಖಂಡರಾದ ವೀರಣ್ಣ ಹಳೇಗೌಡ್ರ ಹಾಗೂ ಸಂಗಪ್ಪ ಕಂದಗಲ್ ಮಾತನಾಡಿ, ಡಿ.ಬಿ. ಸಿದ್ದಾಪುರ ಅವರು ಸಮಾಜದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಏಳಿಗೆ ಸಹಿಸದೇ ಕೆಲವರು ಅವರನ್ನು ತುಳಿಯಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಖಜಾಂಜಿ ಆತ್ಮಾನಂದ ಜಾಲಿಹಾಳ, ರಂಗಪ್ಪ ಸುಣಗದ, ನಾಗಪ್ಪ, ಸಂಗಪ್ಪ ಗಾಳಿ, ಶಿವಣ್ಣ ಹನಮಕ್ಕನವರ, ಸಿದ್ದಣ್ಣ ರಾಜೂರ, ಮಂಜು ಕುರುಬರ ಇದ್ದರು