ಕಳೆದ ವರ್ಷಕ್ಕಿಂತ ಈ ವರ್ಷದ ಜಾತ್ರೆಗೆ ಅತಿ ಕಡಿಮೆ ಸಂಖ್ಯೆಯಲ್ಲಿ ಜಾನುವಾರುಗಳು ಬಂದಿದ್ದು, ₹20ರಿಂದ 50 ಸಾವಿರದ ಒಳಗೆ ದನಗಳು ಮಾರಾಟವಾಗುತ್ತಿವೆ. ಪಟ್ಟಣದಲ್ಲಿ ಸೋಮವಾರ ನಡೆಯುವ ವಾರದ ಸಂತೆಯ ನಂತರ ಜಾನುವಾರುಗಳ ಜಾತ್ರೆಯು ಕೂಡ ಮುಗಿಯುವ ಸಾಧ್ಯತೆ ಇದೆ.
ಸಂಚಾರಕ್ಕೆ ತೊಂದರೆ: ರಾಜ್ಯ ಹೆದ್ದಾರಿಯ ಪಕ್ಕದಲ್ಲಿಯೇ ರೈತರು ಎತ್ತು, ದನಗಳನ್ನು ಕಟ್ಟುತ್ತಿರುವುದರಿಂದ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಸಂಚಾರ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.