ಜನವಾಡ: ಬೀದರ್ ತಾಲ್ಲೂಕಿನ ಜನವಾಡದ ಸಾಹಿತಿ ಬಸವರಾಜ ಹದನೂರೆ ಅವರು ತಮ್ಮ ಮಗನ ಮದುವೆ ಆಹ್ವಾನ ಪತ್ರಿಕೆಯನ್ನು ಕೃತಿಯ ರೂಪದಲ್ಲಿ ಮುದ್ರಿಸಿದ್ದಾರೆ.
‘ಗಿರಿಸಿದ್ಧಲಿಂಗ ಪಂಚಪದಿಗಳು’, ‘ಎದೆಯಾಳದಿಂದ’ ಕವನ ಸಂಕಲನ, ‘ಶ್ರೀ ರೇವಪಯ್ಯನವರ ಜೀವನ ಚರಿತ್ರೆ’ ಸೇರಿ ಮೂರು ಕೃತಿಗಳನ್ನು ಅವರು ಪ್ರಕಟಿಸಿದ್ದಾರೆ. ಈಗ ತಮ್ಮ ಕಿರಿಯ ಪುತ್ರ ವಿಜಯಕುಮಾರ ಅವರ ವಿವಾಹದ ಪ್ರಯುಕ್ತ ಆಹ್ವಾನ ಪತ್ರಿಕೆ ಒಳಗೊಂಡ ‘ಶ್ರೀ ರೇವಪಯ್ಯನವರ ನಾಮಾವಳಿ ಹಾಗೂ ಭಜನಾ ಪದಗಳು’ ಹೆಸರಿನ ನಾಲ್ಕನೇ ಕೃತಿಯನ್ನು ಹೊರ ತಂದಿದ್ದಾರೆ.