ಕಾರ್ಯಕ್ರಮ ಉದ್ಘಾಟಿಸಿದ ಮುಖಂಡ ಚಂದ್ರಶೇಖರ ಕವಲೂರು ಮಾತನಾಡಿ, ಅಂಬೇಡ್ಕರ್ ಹುಟ್ಟಿದ ದಿನವನ್ನು ವಿಶ್ವದ ಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಅಂಥ ಶ್ರೇಷ್ಠ ಜ್ಞಾನಿ ಅವರಾಗಿದ್ದರು. ಅಂಬೇಡ್ಕರ್ ಮತ್ತು ಬಸವಣ್ಣ ಹುಟ್ಟಿದ ದಿನಗಳ ಅವಧಿಯಲ್ಲಿ ಅವರ ಸಂದೇಶಗಳನ್ನು ಸಾರುವ, ಜೀವನ ದರ್ಶನ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.ಗವಿಸಿದ್ದಪ್ಪ ಕೊಪ್ಪಳ, ಉದ್ಯಮಿ ಬಸವರಾಜ ಬಳ್ಳೊಳ್ಳಿ, ಅಮರೇಶ ಕರಡಿ, ಎಂ.ಬಸವರಾಜಪ್ಪ ಇದ್ದರು. ರಾಜೇಶ ಸಸಿಮಠ ಪ್ರಾಸ್ತಾವಿಕ ಮಾತನಾಡಿದರು.