ಹುಮನಾಬಾದ್: ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರನ್ನು ಭಾರತೀಯರೆಲ್ಲರೂ ನಾಯಕ ಎಂದು ಒಪ್ಪಿಕೊಳ್ಳಬೇಕು ಎಂದು ಲೋಕಶಿಕ್ಷಣ ಸಮಿತಿ ತಾಲ್ಲೂಕು ಅಧಿಕಾರಿ ರಮೇಶ ಬಾಗವಾಲೆ ಹೇಳಿದರು.
ಇಲ್ಲಿನ ಶಿವಪುರ ಓಣಿಯ ಸಮಗಾರ ಹರಳಯ್ಯ ಸಮಾಜ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಡಾ. ಅಂಬೇಡ್ಕರ್ ಜಯಂತಿಯಲ್ಲಿ ಉಪನ್ಯಾಸ ನೀಡಿದರು. ನಿವೃತ್ತ ತಹಶೀಲ್ದಾರ್ ತಿಪ್ಪಣ್ಣ ಸಾಲಿವಾಲೆ, ನಿವೃತ್ತ ಶಿಕ್ಷಕ ಮಾಣಿಕರಾವ ಸಾಲಿವಾಲೆ, ಸಂಘದ ಕಾರ್ಯದರ್ಶಿ ಆಜ್ಞೇಶ ಬಿದ್ರಿ ಮಾತನಾಡಿದರು. ಸಮಿತಿ ಅಧ್ಯಕ್ಷ ಅನಿಲ ಬಿದ್ರಿ ಅಧ್ಯಕ್ಷತೆ ವಹಿಸಿದ್ದರು.
ಉಮೇಶ ಬಿದ್ರಿ, ಸಾವನ್ ಬಾಗವಾಲೆ, ಮಹಾಂತೇಶ ಸೂರ್ಯವಂಶಿ, ಸಂಜೀವಕುಮಾರ ದಾಮಾ, ಸುನೀಲ ಬಿದ್ರಿ, ನರೇಶ ದಾಮಾ, ದತ್ತು ಬಾಗವಾಲೆ ಇದ್ದರು.