ಮುಖಂಡ ರವೀಂದ್ರ, ‘ದಲಿತರ ಮೇಲೆ ಸವರ್ಣೀಯರಿಂದ ಇಂತಹ ಹಲ್ಲೆ ಮತ್ತು ದೌರ್ಜನ್ಯಗಳು ನಡೆಯುವುದು ತಪ್ಪಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಉಮೇಶ್, ತಾಲ್ಲೂಕು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಜುಂಜಪ್ಪ ಸ್ವಾಮಿ, ಗ್ರಾಮಸ್ಥರಾದ ಗಿರೀಶ್, ಗೋವಿಂದರಾಜ, ಕಿರಣ, ರಾಜು, ಸಚಿನ್, ಸೀನ, ವೆಂಕಟೇಶ, ನವೀನ, ಮಂಜುನಾಥ, ಗಂಗಾಧರ ಇದ್ದರು. ಬಸ್ ಚಾಲಕ ಗೋವಿಂದರಾಜು ವಿರುದ್ಧ ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕರ್ತವ್ಯದಲ್ಲಿದ್ದ ನನ್ನ ಮೇಲೆ ಮೂರ್ತಿ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಬಸ್ ಚಾಲಕ ಗೋವಿಂದರಾಜು ಪ್ರತಿ ದೂರು ದಾಖಲಿಸಿದ್ದಾರೆ.