ಈ ವೇಳೆ ಸ್ಥಳದಲ್ಲಿದ್ದ ಜೆಡಿಎಸ್ ಮುಖಂಡ ಎಚ್.ಎಸ್. ಶಂಕರ್, 40 ವರ್ಷಗಳಿಂದ ವಿಜಯಕುಮಾರ್ ಈ ಜಾಗದಲ್ಲಿ ವಾಸಿಸುತ್ತಿದ್ದು, ಅವರ ತಂದೆಯ ಕಾಲದಲ್ಲಿಯೇ ಪಂಚಾಯಿತಿ ಯಿಂದ ಖಾತೆ ಮಾಡಲಾಗಿದೆ. ಪಂಚಾಯಿತಿ ವತಿಯಿಂದಲೇ ವಸತಿ ಯೋಜನೆಯಡಿ ಮನೆ ಕಟ್ಟಿಕೊಳ್ಳಲು ಅನುಮತಿ ದೊರೆತಿದೆ. ಇದು ಹೇಗೆ ಅಕ್ರಮವಾಗುತ್ತದೆ. ಅಕ್ರಮವಾಗಿ ಕಟ್ಟಿಕೊಂಡಿರುವುದಕ್ಕೆ ಸೂಕ್ತ ದಾಖಲೆ ಒದಗಿಸಿ, ತೆರವುಗೊಳಿಸಲು ಆದೇಶವಿದ್ದರೆ ನೀಡಿ ಎಂದು ಹೇಳಿದರು.