ತಹಶೀಲ್ದಾರ್ ಬಿ.ಎಸ್.ಪುಟ್ಟಶೆಟ್ಟಿ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸ್ಥಳಕ್ಕೆ ಭೇಟಿ ನೀಡಿದಾಗ ಕೊರೆದಿದ್ದ ಕೊಳವೆ ಬಾವಿಯನ್ನು ಮುಚ್ಚಲಾಗಿತ್ತು. ಕೊಳವೆ ಬಾವಿ ಕೊರೆಸಿದ ರೈತ ಪ್ರಸನ್ನ ಅವರೂ ಮನೆಯಲ್ಲಿ ಇರಲಿಲ್ಲ. ಹರಳಿನಂಥ ಕಲ್ಲು ದೊರೆತ ಬಗ್ಗೆ ಅವರ ಮನೆಯವರನ್ನು ಪ್ರಶ್ನಿಸಿದಾಗ ‘ಆ ರೀತಿಯ ಯಾವ ಕಲ್ಲೂ ದೊರಕಿಲ್ಲ. ಸುಳ್ಳು ಹೇಳುತ್ತಿದ್ದಾರೆ. ಪ್ರಸನ್ನ ಅವರು ಕೇಸಿಂಗ್ ಪೈಪ್ ತರಲು ಹೋಗಿದ್ದಾರೆ’ ಎಂದು ತಿಳಿಸಿದರು.