ಗ್ರಾಮದ ಬಡಗಿ ಬೋರಯ್ಯ ಅವರ ಪತ್ನಿ ಪಾಪಮ್ಮ ಪ್ರತಿ ವರ್ಷದಂತೆ ಈ ವರ್ಷವೂ ಯಲ್ಲಮ್ಮನ ಗುಡ್ಡಕ್ಕೆ ಹೋಗಿ ಬಂದಿದ್ದರು. ದೇವಿಗೆ ಹರಕೆ ತೀರಿಸಲು ಶುಕ್ರವಾರ ರಾತ್ರಿ ಪೂಜೆ ಮತ್ತು ಪ್ರಸಾದ ಏರ್ಪಡಿಸಿದ್ದರು. ಇದರಲ್ಲಿ ಭಾಗವಹಿಸಿ ಹೋಳಿಗೆ ಊಟ ಸೇವಿಸಿದವರಿಗೆ ರಾತ್ರಿ 11ರ ನಂತರ ಹೊಟ್ಟೆನೋವು, ಹೊಟ್ಟೆಯಲ್ಲಿ ಉರಿ, ವಾಂತಿ– ಭೇದಿ ಕಾಣಿಸಿಕೊಂಡಿತು.