640 ದಿನಗಳಿಂದ ಮಹಾದಾಯಿ ನೀರಿಗಾಗಿ ಈ ಭಾಗದ ಜನತೆ ನಿರಂತರ ಹೋರಾಟ ನಡೆಸುತ್ತಿದ್ದು, ನೀರು ಸಿಗುವ ತನಕ ಈ ಹೋರಾಟ ಮುಂದುವರಿಯಲಿದೆ. ಅಲ್ಲದೇ ನಾಲ್ಕು ಜಿಲ್ಲೆಗಳ ಸಂಸದರು ಬಿಜೆಪಿಯವರಾಗಿದ್ದು, ಅವರ ಪಕ್ಷವೇ ಕೇಂದ್ರದಲ್ಲಿ ಅಽಧಿಕಾರದಲ್ಲಿದೆ. ಹಾಗಾಗಿ ಜನರ ಸಂಕಷ್ಟ ಅರಿತು ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒಳಗೊಂಡ ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಈ ವಿವಾದಕ್ಕೆ ಇತಿಶ್ರೀ ಹಾಡಬೇಕು ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.