ಬಿಜೆಪಿ ಜಿಲ್ಲಾಉಪಾಧ್ಯಕ್ಷ ರಾಜುಗೌಡ ಪಾಟೀಲ( ಕುದರಿ ಸಾಲವಾಡಗಿ), ಮೋಹನ ಮೇಟಿ ಮಾತನಾಡಿದರು. ಗೊಳಸಾರದ ಅಭಿನವ ಪುಂಡಲಿಂಗ ಮಹಾರಾಜರು ಸಾನಿಧ್ಯ ವಹಿಸಿದ್ದರು. ಕಾಂಗ್ರೆಸ್ ಮುಖಂಡ ಸಂಗಮೇಶ ಛಾಯಾಗೋಳ, ನಿಂಗಪ್ಪ ಶಿವೂರ, ಪ್ರೊ.ಬಿ.ಎನ್.ಪಾಟೀಲ, ರಮೇಶ ಮಶಿಬಿನಾಳ, ಶಿವಾಜಿ ಮೆಟಗಾರ, ಚಾಂದಕವಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಾವುಡಿ ಸೇರಿದಂತೆ ಇತರರಿದ್ದರು. ಕಾರ್ಯಕ್ರಮದಲ್ಲಿ ಜಾತ್ರೆ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿಗಳ ಭವ್ಯ ಮೆರವಣಿಗೆ ನಡೆಯಿತು. ಸಮಾವೇಶದಲ್ಲಿ ಜಾಲವಾದ, ಮಣೂರ, ಕೊರವಾರ, ಕೊಕಟನೂರ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.